ಜುಲೈ 26, 2021

ಕುಸುಮ

ಕಾಗಿನೆಲೆಯ ಆದಿಕೇಶವನ
ದರುಶನಕೆ ನಿಂತಿರುವ ಸಂತ
ಕನಕದಾಸರ ಕೀರ್ತನೆಗಳ
ಜ್ಞಾನ ಬಂಡಾರ ಅನಂತ

ಕುಸುಮದಲಿ ಗಂಧವ
ಹೀರುವ ಜನರ ನಡುವೆ
ಗಂಧದೊಳ್ ಕುಸುಮ
ಹುಡುಕಿ ಅಲ್ಲಿ ‌ಕೇಶವನ ಕಂಡನು

ಮೇಲು‌ ಕೀಳಿನ ಜಗಳದಿ
ನಿಂತು ದೂರಾಗುವ ಜನರ
ಕುಲದ ನೆಲೆಯ ಪ್ರಶ್ನಿಸಿ
ನಿಂತ‌ ನೆಲವ ಅಲುಗಾಡಿಸಿದಂತೆ
ಕುಲ‌ ಕುಲ‌ ಕುಲವೆಂಬ
ನಂಬಿಕೆ ಅಪನಂಬಿಕೆಯ
ಒಮ್ಮೆಲೇ‌ದೂರವಾಗಿಸಿದ
ದಾಸರಯ್ಯ ಅವರು
ಶ್ರೀ ಕನಕದಾಸರು